ಕರ್ತರಿ ಪ್ರಯೋಗ
ಕ್ರಿಯಾ ಪದವು ವಾಕ್ಯಗಳಲ್ಲಿ ಕರ್ತೃಪದವನ್ನು ಪ್ರಧಾನವಾಗಿ ಅನುಸರಿಸುತ್ತಿದ್ದರೆ ಅದನ್ನು ಕರ್ತರಿ ಪ್ರಯೋಗ ಎಂದು ಕರೆಯುತ್ತೇವೆ .”
ಉದಾ : ಕರ್ತೃಪದ ಕರ್ಮಪದ ಕ್ರಿಯಾಪದ
ರಾಮನು ರಾವಣನನ್ನು ಕೊಂದನು
ಈ ಉದಾ ಯಲ್ಲಿ ” ಕೊಂದನು ” ಎಂಬ ಕ್ರಿಯಾಪದವು ” ರಾಮನು” ಎಂಬ ಕರ್ತೃ ಪದವನ್ನು ಅನುಸರಿಸಿದೆ. ಕರ್ತರಿ ಪ್ರಯೋಗವು ಯಾವಾಗಲೂ ಆದಿಯಲ್ಲಿ ಕರ್ತೃ ಪದವನ್ನು ಮಧ್ಯದಲ್ಲಿ ಕರ್ಮಪದವನ್ನು ಅಂತ್ಯದಲ್ಲಿ ಕ್ರಿಯಾಪದವನ್ನು ಒಳಗೊಂದಿರುತ್ತದೆ.
ಕರ್ತೃ ಪದವು ಪ್ರಧಮವಿಭಕ್ತಿಯಿಂದ ಕೂಡದ್ದು.ಕರ್ಮ ಪದವು ದ್ವಿತೀಯ ವಿಭಕ್ತಿಯಿಂದ ಕೂಡಿರುತ್ತದೆ.ಕ್ರಿಯಾ ಪದವು ಕ್ರಿಯೆಯನ್ನು ಸೂಚಿಸುತ್ತದೆ.
ಉದಾ : 1. ರಾಮನು ರಾವಣನನ್ನು ಕೊಂದನು
2. ನಾನು ಕವಿತೆಯನ್ನು ಬರೆಯುತ್ತೇನೆ.
3. ಸೀತೆಯು ಹಣ್ಣನ್ನು ತಿಂದಳು
4. ಮಳೆಯು ಇಳೆಯನ್ನು ತಣಿಸಿತು.
5. ರಾಮನು ಸೇತುವೆಯನ್ನು ಕಟ್ಟಿದನು.
6. ಭೀಮನು ಬಕಾಸುರನನ್ನು ಕೊಂದನು.
7. ಅಣ್ಣನು ನನ್ನನ್ನು ಕೊಂದನು .
8. ಮಕ್ಕಳು ಪುಸ್ತಕವನ್ನು ಓದಿದರು .
9. ಜನರು ಜಾತ್ರೆಯನ್ನು ಕಂಡರು .
Notes By : Kannada Kanaja Android App
(ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವಯಂ ತಯಾರಿಗಾಗಿ ಇಂದೇ "Kannada Kanaja" ಆಂಡ್ರಾಯ್ಡ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ )
App Download Link
https://play.google.com/store/apps/details?id=com.app.kkmwqsomnbaruonjfshgtxqbldlvpvjhzaeiitxey
1 Comments
TQ.sir but please refer to class 9 & class 10 Siri Kannada textbook.In that book the way of changing from kartari to karmani is different from the way I have prescribed in this website.I am totally confused.Please which is the right way to transform
ReplyDelete